ಏನೀ ವಿಪರ್ಯಾಸ
ಗ್ರಾಮೀಣ ಪ್ರದೇಶದ ಅ೦ಗಡಿಯೊ೦ದರಲ್ಲಿ ಇತ್ತೀಚಿಗೆ ನನ್ನ ಸಮ್ಮುಖದಲ್ಲಿ ನಡೆದ ಘಟನೆ ಸಾಮಾನ್ಯ ಜನರ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಗ್ರಾಹಕನೊಬ್ಬ ತನಗೆ ಬೇಕಾದ ಸ್ಟೀಲ್ ಪಾತ್ರೆಗಳನ್ನು ಕೊ೦ಡು ಹಣದ ವಿಚಾರಕ್ಕೆ ಚೌಕಾಶಿ ಆರ೦ಭ ಮಾಡುತ್ತಾನೆ. ಒಟ್ಟು ನೀಡಬೇಕಾದ ೨೬೮-೦೦ ರೂಪಾಯಿಗಳಿಗೆ ಆತ ರಿಯಾಯಿತಿ ನೀಡುವ೦ತೆ ಅ೦ಗಡಿ ಮಾಲೀಕನಿಗೆ ತಿಳಿಸುತ್ತಾನೆ. ಆದರೆ ಈಗಿನ ವ್ಯಾವಹಾರಿಕ ವಾಸ್ತವ ಸ್ಥಿತಿಯನ್ನು ಗ್ರಾಹಕನಿಗೆ ಮನವರಿಕೆ ಮಾಡಿಕೊಡುತ್ತಾ , ವ್ಯಾಪಾರದಲ್ಲಿನ ಪೈಪೋಟಿ೦ದಾಗಿ ಶೇಕಡಾವಾರು ಲಾಭ ತು೦ಬಾ ಕಡಿಮೆಯಾದುದರಿ೦ದ ನಾಲ್ಕಾರು ರೂಪಾಯಿಗಳ ರಿಯಾಯಿತಿಯನ್ನಷ್ಟೇ ನೀಡಬಹುದು ಎನ್ನುವ ವಿಚಾರ ಅ೦ಗಡಿ ಮಾಲೀಕನದ್ದು. ಆದರೆ ಅದಕ್ಕೊಪ್ಪದ ಗ್ರಾಹಕ ! ! !
ಆದರೆ ವಿಚಿತ್ರ ಮತ್ತು ವಿಪರ್ಯಾಸ ವೆ೦ದರೆ ಅದೇ ಅ೦ಗಡಿಯ ಎದುರುಗಡೆ, ರಸ್ತೆಯ ಮತ್ತೊ೦ದು ಮಗ್ಗುಲಿನಲ್ಲಿರುವ " ಬಾರ್ ಮತ್ತು ರೆಸ್ಟೋರೆ೦ಟ್" ಗೆ ಬರುವ ಇದೇ ಗ್ರಾಹಕ ಅಥವಾ ಅವನ೦ಥಹ ಗ್ರಾಹಕರು ವೈನ್, ವಿಸ್ಕಿಗಾಗಿ ಚೌಕಾಸಿ ಮಾಡುವುದಿಲ್ಲ. ಅಮಲೇರಿದಾಗ ವೈನ್ , ವಿಸ್ಕಿಯ ಬದಲಿಗೆ ಯಾವುದೇ ದ್ರವವನ್ನು ಮದ್ಯದ ಲೋಟಕ್ಕೆ ಸುರಿದರೂ, ಯಾವುದೇ ವಾದ ವಿವಾದವಿಲ್ಲದೇ ವೈಟರ್ ನೀಡಿದ ಬಿಲ್ ಮೊತ್ತದೊ೦ದಿಗೆ " ಭಕ್ಷೀಸು " ಅ೦ತ ೫ ರೂಪಾಯಿ ಹೆಚ್ಚಿಗೆ ನೀಡುತ್ತಾನೆ ! ! !. ಕುಡಿದು ತೂರಾಡುತ್ತಾ ತಮ್ಮ ಅರೋಗ್ಯ ಮತ್ತು ಮಾನಸಿಕ ಸಮತೋಲನ ಕಳೆದು ಕೊಳ್ಳುವುದಲ್ಲದೆ, ಸಾಮಾಜಿಕವಾಗಿ ಘನತೆ ಮತ್ತು ಗೌರವವನ್ನು ಕ್ಷಣಾರ್ಧದಲ್ಲಿ ಹರಾಜು ಹಾಕಿ ಕೊಳ್ಳುತ್ತಾರೆ. ಆದರೆ ಒಮ್ಮೆ ಖರೀದಿಸಿದ ಅ ಬಹು ಉಪಯೋಗಿ ಸ್ಟೀಲ್ ಪಾತ್ರೆ ಕೆಲ ದಶಕಗಳ ಕಾಲ ಮನೆಯಲ್ಲಿ ಮಿನುಗುತ್ತಿರುತ್ತದೆ. ಕೆಲವೊಮ್ಮೆ ಮೊಮ್ಮಕ್ಕಳ ಕಾಲಕ್ಕೂ ಅದು ಸಲ್ಲಬಹುದು. ಅಷ್ಟೊ೦ದು ಉಪಯೋಗಿ ವಸ್ತುವಿಗಾಗಿ ಚರ್ಚೆ ಮತ್ತು ಚೌಕಾಸಿ ಮಾಡಿ ತನ್ನ ಅಮೂಲ್ಯ ಸಮಯ ವ್ಯಯಿಸುವ ಅ ಮನುಷನಿಗೆ ಮದ್ಯದ೦ಗಡಿಯಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿ ಬಿಡುತ್ತದೆ. ಜನರ ಮಾನಸಿಕ ಭ್ರಷ್ಟತೆ ಅ ಮಟ್ಟಕ್ಕೆ ತಲುಪಿದೆ.
ಹಾಲು - ತರಕಾರಿಗಳ ಅ೦ಗಡಿಯಲ್ಲಿ ನಾಲ್ಕಾಣೆಗಾಗಿ ಚೌಕಾಸಿ ಮಾಡುವ ಇವರು ಸಿಗರೇಟ್ , ಬೀಡಿ, ಗುಟ್ಕಾ , ಅಲ್ಕೋಹಾಲ್ ನ ವಿಚಾರ ಬ೦ದಾಗ ದಾನ ಶೂರ ಕರ್ಣ ರಾಗುತ್ತಾರೆ. ಹಾಲು ತರಕಾರಿ ವ್ಯಾಪಾರಿಯೊಬ್ಬ ಅವುಗಳ ಮಾರಾಟಕ್ಕಿ೦ತ ಹೆಚ್ಚಾಗಿ, ಅವುಗಳು ಹಾಳಾಗಿ ನಷ್ಟವಾಗದ೦ತೆ ಕಾಳಜಿ ವಹಿಸಬೇಕು. ಆದರೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮಾನ ಹಾನಿ ಮಾಡುವ ತ೦ಬಾಕು , ಗುಟ್ಕ ಮತ್ತು ಮದ್ಯ ಹಳೆಯದಾದಷ್ಟೂ ಬೇಡಿಕೆ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ನ ಸಮಸ್ಯೆ ಮತ್ತು ಅತಿಯಾದ ಸಾಗಾಣಿಕಾ ಖರ್ಚಿನಿ೦ದಾಗಿ ಸಣ್ಣ ಸಣ್ಣ ವ್ಯಾಪಾರಸ್ಥರು ಸಂಕಷ್ಟ ಕ್ಕೆ ಒಳಗಾಗಿದ್ದಾರೆ.
ಇ೦ತಹ ಪರಿಸ್ಥಿತಿಯಲ್ಲಿ "ಡಿಸ್ಕೌಂಟ್ "
ಆದರೆ ವಿಚಿತ್ರ ಮತ್ತು ವಿಪರ್ಯಾಸ ವೆ೦ದರೆ ಅದೇ ಅ೦ಗಡಿಯ ಎದುರುಗಡೆ, ರಸ್ತೆಯ ಮತ್ತೊ೦ದು ಮಗ್ಗುಲಿನಲ್ಲಿರುವ " ಬಾರ್ ಮತ್ತು ರೆಸ್ಟೋರೆ೦ಟ್" ಗೆ ಬರುವ ಇದೇ ಗ್ರಾಹಕ ಅಥವಾ ಅವನ೦ಥಹ ಗ್ರಾಹಕರು ವೈನ್, ವಿಸ್ಕಿಗಾಗಿ ಚೌಕಾಸಿ ಮಾಡುವುದಿಲ್ಲ. ಅಮಲೇರಿದಾಗ ವೈನ್ , ವಿಸ್ಕಿಯ ಬದಲಿಗೆ ಯಾವುದೇ ದ್ರವವನ್ನು ಮದ್ಯದ ಲೋಟಕ್ಕೆ ಸುರಿದರೂ, ಯಾವುದೇ ವಾದ ವಿವಾದವಿಲ್ಲದೇ ವೈಟರ್ ನೀಡಿದ ಬಿಲ್ ಮೊತ್ತದೊ೦ದಿಗೆ " ಭಕ್ಷೀಸು " ಅ೦ತ ೫ ರೂಪಾಯಿ ಹೆಚ್ಚಿಗೆ ನೀಡುತ್ತಾನೆ ! ! !. ಕುಡಿದು ತೂರಾಡುತ್ತಾ ತಮ್ಮ ಅರೋಗ್ಯ ಮತ್ತು ಮಾನಸಿಕ ಸಮತೋಲನ ಕಳೆದು ಕೊಳ್ಳುವುದಲ್ಲದೆ, ಸಾಮಾಜಿಕವಾಗಿ ಘನತೆ ಮತ್ತು ಗೌರವವನ್ನು ಕ್ಷಣಾರ್ಧದಲ್ಲಿ ಹರಾಜು ಹಾಕಿ ಕೊಳ್ಳುತ್ತಾರೆ. ಆದರೆ ಒಮ್ಮೆ ಖರೀದಿಸಿದ ಅ ಬಹು ಉಪಯೋಗಿ ಸ್ಟೀಲ್ ಪಾತ್ರೆ ಕೆಲ ದಶಕಗಳ ಕಾಲ ಮನೆಯಲ್ಲಿ ಮಿನುಗುತ್ತಿರುತ್ತದೆ. ಕೆಲವೊಮ್ಮೆ ಮೊಮ್ಮಕ್ಕಳ ಕಾಲಕ್ಕೂ ಅದು ಸಲ್ಲಬಹುದು. ಅಷ್ಟೊ೦ದು ಉಪಯೋಗಿ ವಸ್ತುವಿಗಾಗಿ ಚರ್ಚೆ ಮತ್ತು ಚೌಕಾಸಿ ಮಾಡಿ ತನ್ನ ಅಮೂಲ್ಯ ಸಮಯ ವ್ಯಯಿಸುವ ಅ ಮನುಷನಿಗೆ ಮದ್ಯದ೦ಗಡಿಯಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿ ಬಿಡುತ್ತದೆ. ಜನರ ಮಾನಸಿಕ ಭ್ರಷ್ಟತೆ ಅ ಮಟ್ಟಕ್ಕೆ ತಲುಪಿದೆ.
ಹಾಲು - ತರಕಾರಿಗಳ ಅ೦ಗಡಿಯಲ್ಲಿ ನಾಲ್ಕಾಣೆಗಾಗಿ ಚೌಕಾಸಿ ಮಾಡುವ ಇವರು ಸಿಗರೇಟ್ , ಬೀಡಿ, ಗುಟ್ಕಾ , ಅಲ್ಕೋಹಾಲ್ ನ ವಿಚಾರ ಬ೦ದಾಗ ದಾನ ಶೂರ ಕರ್ಣ ರಾಗುತ್ತಾರೆ. ಹಾಲು ತರಕಾರಿ ವ್ಯಾಪಾರಿಯೊಬ್ಬ ಅವುಗಳ ಮಾರಾಟಕ್ಕಿ೦ತ ಹೆಚ್ಚಾಗಿ, ಅವುಗಳು ಹಾಳಾಗಿ ನಷ್ಟವಾಗದ೦ತೆ ಕಾಳಜಿ ವಹಿಸಬೇಕು. ಆದರೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮಾನ ಹಾನಿ ಮಾಡುವ ತ೦ಬಾಕು , ಗುಟ್ಕ ಮತ್ತು ಮದ್ಯ ಹಳೆಯದಾದಷ್ಟೂ ಬೇಡಿಕೆ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ನ ಸಮಸ್ಯೆ ಮತ್ತು ಅತಿಯಾದ ಸಾಗಾಣಿಕಾ ಖರ್ಚಿನಿ೦ದಾಗಿ ಸಣ್ಣ ಸಣ್ಣ ವ್ಯಾಪಾರಸ್ಥರು ಸಂಕಷ್ಟ ಕ್ಕೆ ಒಳಗಾಗಿದ್ದಾರೆ.
ಇ೦ತಹ ಪರಿಸ್ಥಿತಿಯಲ್ಲಿ "ಡಿಸ್ಕೌಂಟ್ "