Tuesday, August 24, 2010

ಏನೀ ವಿಪರ್ಯಾಸ
ಗ್ರಾಮೀಣ ಪ್ರದೇಶದ ಅ೦ಗಡಿಯೊ೦ದರಲ್ಲಿ ಇತ್ತೀಚಿಗೆ ನನ್ನ ಸಮ್ಮುಖದಲ್ಲಿ ನಡೆದ ಘಟನೆ ಸಾಮಾನ್ಯ ಜನರ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಗ್ರಾಹಕನೊಬ್ಬ ತನಗೆ ಬೇಕಾದ ಸ್ಟೀಲ್ ಪಾತ್ರೆಗಳನ್ನು ಕೊ೦ಡು ಹಣದ ವಿಚಾರಕ್ಕೆ ಚೌಕಾಶಿ ಆರ೦ಭ ಮಾಡುತ್ತಾನೆ. ಒಟ್ಟು ನೀಡಬೇಕಾದ ೨೬೮-೦೦ ರೂಪಾಯಿಗಳಿಗೆ ಆತ ರಿಯಾಯಿತಿ ನೀಡುವ೦ತೆ ಅ೦ಗಡಿ ಮಾಲೀಕನಿಗೆ ತಿಳಿಸುತ್ತಾನೆ. ಆದರೆ ಈಗಿನ ವ್ಯಾವಹಾರಿಕ ವಾಸ್ತವ ಸ್ಥಿತಿಯನ್ನು ಗ್ರಾಹಕನಿಗೆ ಮನವರಿಕೆ ಮಾಡಿಕೊಡುತ್ತಾ , ವ್ಯಾಪಾರದಲ್ಲಿನ ಪೈಪೋಟಿ೦ದಾಗಿ ಶೇಕಡಾವಾರು ಲಾಭ ತು೦ಬಾ ಕಡಿಮೆಯಾದುದರಿ೦ದ ನಾಲ್ಕಾರು ರೂಪಾಯಿಗಳ ರಿಯಾಯಿತಿಯನ್ನಷ್ಟೇ ನೀಡಬಹುದು ಎನ್ನುವ ವಿಚಾರ ಅ೦ಗಡಿ ಮಾಲೀಕನದ್ದು. ಆದರೆ ಅದಕ್ಕೊಪ್ಪದ ಗ್ರಾಹಕ ! ! !

ಆದರೆ ವಿಚಿತ್ರ ಮತ್ತು ವಿಪರ್ಯಾಸ ವೆ೦ದರೆ ಅದೇ ಅ೦ಗಡಿಯ ಎದುರುಗಡೆ, ರಸ್ತೆಯ ಮತ್ತೊ೦ದು ಮಗ್ಗುಲಿನಲ್ಲಿರುವ " ಬಾರ್ ಮತ್ತು ರೆಸ್ಟೋರೆ೦ಟ್" ಗೆ ಬರುವ ಇದೇ ಗ್ರಾಹಕ ಅಥವಾ ಅವನ೦ಥಹ ಗ್ರಾಹಕರು ವೈನ್, ವಿಸ್ಕಿಗಾಗಿ ಚೌಕಾಸಿ ಮಾಡುವುದಿಲ್ಲ. ಅಮಲೇರಿದಾಗ ವೈನ್ , ವಿಸ್ಕಿಯ ಬದಲಿಗೆ ಯಾವುದೇ ದ್ರವವನ್ನು ಮದ್ಯದ ಲೋಟಕ್ಕೆ ಸುರಿದರೂ, ಯಾವುದೇ ವಾದ ವಿವಾದವಿಲ್ಲದೇ ವೈಟರ್ ನೀಡಿದ ಬಿಲ್ ಮೊತ್ತದೊ೦ದಿಗೆ " ಭಕ್ಷೀಸು " ಅ೦ತ ೫ ರೂಪಾಯಿ ಹೆಚ್ಚಿಗೆ ನೀಡುತ್ತಾನೆ ! ! !. ಕುಡಿದು ತೂರಾಡುತ್ತಾ ತಮ್ಮ ಅರೋಗ್ಯ ಮತ್ತು ಮಾನಸಿಕ ಸಮತೋಲನ ಕಳೆದು ಕೊಳ್ಳುವುದಲ್ಲದೆ, ಸಾಮಾಜಿಕವಾಗಿ ಘನತೆ ಮತ್ತು ಗೌರವವನ್ನು ಕ್ಷಣಾರ್ಧದಲ್ಲಿ ಹರಾಜು ಹಾಕಿ ಕೊಳ್ಳುತ್ತಾರೆ. ಆದರೆ ಒಮ್ಮೆ ಖರೀದಿಸಿದ ಅ ಬಹು ಉಪಯೋಗಿ ಸ್ಟೀಲ್ ಪಾತ್ರೆ ಕೆಲ ದಶಕಗಳ ಕಾಲ ಮನೆಯಲ್ಲಿ ಮಿನುಗುತ್ತಿರುತ್ತದೆ. ಕೆಲವೊಮ್ಮೆ ಮೊಮ್ಮಕ್ಕಳ ಕಾಲಕ್ಕೂ ಅದು ಸಲ್ಲಬಹುದು. ಅಷ್ಟೊ೦ದು ಉಪಯೋಗಿ ವಸ್ತುವಿಗಾಗಿ ಚರ್ಚೆ ಮತ್ತು ಚೌಕಾಸಿ ಮಾಡಿ ತನ್ನ ಅಮೂಲ್ಯ ಸಮಯ ವ್ಯಯಿಸುವ ಅ ಮನುಷನಿಗೆ ಮದ್ಯದ೦ಗಡಿಯಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿ ಬಿಡುತ್ತದೆ. ಜನರ ಮಾನಸಿಕ ಭ್ರಷ್ಟತೆ ಅ ಮಟ್ಟಕ್ಕೆ ತಲುಪಿದೆ.

ಹಾಲು - ತರಕಾರಿಗಳ ಅ೦ಗಡಿಯಲ್ಲಿ ನಾಲ್ಕಾಣೆಗಾಗಿ ಚೌಕಾಸಿ ಮಾಡುವ ಇವರು ಸಿಗರೇಟ್ , ಬೀಡಿ, ಗುಟ್ಕಾ , ಅಲ್ಕೋಹಾಲ್ ನ ವಿಚಾರ ಬ೦ದಾಗ ದಾನ ಶೂರ ಕರ್ಣ ರಾಗುತ್ತಾರೆ. ಹಾಲು ತರಕಾರಿ ವ್ಯಾಪಾರಿಯೊಬ್ಬ ಅವುಗಳ ಮಾರಾಟಕ್ಕಿ೦ತ ಹೆಚ್ಚಾಗಿ, ಅವುಗಳು ಹಾಳಾಗಿ ನಷ್ಟವಾಗದ೦ತೆ ಕಾಳಜಿ ವಹಿಸಬೇಕು. ಆದರೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮಾನ ಹಾನಿ ಮಾಡುವ ತ೦ಬಾಕು , ಗುಟ್ಕ ಮತ್ತು ಮದ್ಯ ಹಳೆಯದಾದಷ್ಟೂ ಬೇಡಿಕೆ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ನ ಸಮಸ್ಯೆ ಮತ್ತು ಅತಿಯಾದ ಸಾಗಾಣಿಕಾ ಖರ್ಚಿನಿ೦ದಾಗಿ ಸಣ್ಣ ಸಣ್ಣ ವ್ಯಾಪಾರಸ್ಥರು ಸಂಕಷ್ಟ ಕ್ಕೆ ಒಳಗಾಗಿದ್ದಾರೆ.
ಇ೦ತಹ ಪರಿಸ್ಥಿತಿಯಲ್ಲಿ "ಡಿಸ್ಕೌಂಟ್ "